ಗೋ – ಕುಲದ ಹಾಡು

ಗೋಪಾಲನ ಗೆಜ್ಜೆಯ ಗಲ ಗಲ ತುಂಬುತ್ತಿದೆ ಕಿವಿಯ
ಯಶೋದೆಯ ಜೋಗುಳದ ಹಾಡು
ತಟ್ಟಿ ಮಲಗಿಸಿದೆ ಇವನ ಜಗದೋದ್ಧಾರನ
ಈ ರಾತ್ರಿ ಯಾಕೆ ತಣ್ಣಗಿದೆ? ಬೇಸಿಗೆಯ ಉರಿ ಸೆಕೆಯು
ಜೀವ ಹಿಂಡಿ ಬೆವರು ಬಸಿಯಿಸಬೇಕು ಅದರ ಬದಲು
ತಣ್ಣನೆಯ ಗಾಳಿ ಕಚಗುಳಿ ಇಟ್ಟು ಜೀವ ನಲಿದಿದೆ
ನಂದಗೋಕುಲದ ರಾತ್ರಿ ಮಲ್ಲಿಗೆಯೊಂದು
ಅರಳಿ ಕಿಲ ಕಿಲ ನಕ್ಕಿದೆ ಅದೇ ಪರಿಮಳ
ತುಂಬಿ ತಡೆಯದಾಗಿದೆ ತನ್ನ ಸಂತೋಷ
ನನ್ನ ಘ್ರಾಣೇಂದ್ರಿಯ

ನಂದಗೋಕುಲದಲೊಬ್ಬ ತುಂಟ ಚುರುಕಿನ ಹುಡುಗ
ಬೆಣ್ಣೆಯಲ್ಲಿ ಹಲ್ಲುತಿಕ್ಕಿ ಹಾಲಲ್ಲಿ ಮುಖ ತೊಳೆದಿದ್ದು
ಅದೋ ತೊಟ್ಟಿಕ್ಕುತ್ತಿದೆ ಇಲ್ಲಿ ಅದಕ್ಕೆ ಬಾಯ್ತೆರೆದ
ಈ ಗೋವುಗಳು ಬಯ್ತುಂಬುವ ತವಕಕ್ಕೆ
ಜೀವ ಸಲ್ಲಿಸಿವೆ

ತನ್ನ ವಿನೋದದಲ್ಲೇ ಮಗ್ನ ಆ ನಗ್ನ
ಕೃಷ್ಣನನ್ನು ಕೊಳಲೂದ ಕರೆಯಲು
ಅವನ ಉಸಿರಿನ ಹಾದಿ ಹಿಡಿದು
ಹಾರಿದೆ ನನ್ನ ಜೀವದ ಹಕ್ಕಿ
ನಂದಗೋಕುಲದ ಬಾಗಿಲುಗಳು ಬೇಡ
ಕಿಟಕಿ ತರೆದರೂ ಸಾಕು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಐಸುರ ಛೇ ಇದು ಏನು ಮೊಹರಮದ್ಹಬ್ಬ
Next post ಹಂತಗಳು

ಸಣ್ಣ ಕತೆ

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

cheap jordans|wholesale air max|wholesale jordans|wholesale jewelry|wholesale jerseys